ಅವರು ಕೊಡುವ ಸಂಬಳಕ್ಕೆ ಹುಡುಗ ದಿನವೂ ಕಾರು ತೊಳೆದು ಹೊಳಪು ತುಂಬುತ್ತಿದ್ದ. ಯಜಮಾನ ಕಾರಿನ ಬಾಗಿಲು ತೆಗಿಯುವಾಗ ಕೈ ಅಂಟಂಟಾಯಿತು. ಹುಡುಗನಿಗೆ ಕಪಾಳಕ್ಕೆ ಹೊಡೆದು “ಏನು ಸರಿಯಾಗಿ ಒರಿಸಿಲ್ಲವಾ?” ಎಂದರು. “ಅಪ್ಪಾ! ಜಿಲೇಬಿ ಕೈಯಿಂದ ನಾನೇ ಬಾಗಿಲು ತೆರದೆ” ಎಂದಳು ಅವರ ಪುಟ್ಟ ಕುವರಿ. “ಮಗಳೇ! ನನಗೆ ಜಿಲೇಬಿ ತಿನಿಸಲು ಬಂದ ನಿನಗೆ ಒಂದು ಮುದ್ದು, ಅವನು ಅಂಟನ್ನು ಸರಿಯಾಗಿ ವರಿಸಿಲ್ಲ ಅದಕ್ಕೆ ಅವನಿಗೆ ಒಂದು ಗುದ್ದು” ಎಂದು ಬೆನ್ನಿಗೆ ಗುದ್ದಿದರು. “ಅಪ್ಪಾ ಅವನಿಗೆ ಹೊಡೀ ಬೇಡಿ. ಅವನು ಕಾರು ಒರಿಸಿದ್ದಕ್ಕೆ ಜಿಲೇಬಿ ಕೊಡುತ್ತೇನೆ” ಎಂದಿತು ಮಗು ಅನುಕಂಪದಿಂದ. ಮಗುವಿನ ಅನುಕಂಪ ಯಜಮಾನನಿಗೆ ಚಾವಟಿ ಏಟು ಹಾಕಿ ಹೃದಯದ ಬಾಗಿಲನ್ನು ತೆರೆಯಿತು.
*****
Related Post
ಸಣ್ಣ ಕತೆ
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…